ಕಷ್ಟವೆಂಬ ಮಾಯೆ ಓಡೋಡಿ ಬಂದಾಗ
ದುಃಖದ ಛಾಯೆ ಆವರಿಸಿದಾಗ
ಹತ್ತಿರದವರೆಲ್ಲ ಬಹುದೂರ ಸರಿದಾಗ
ಒಬ್ಬಂಟಿತನವು ಕಾಲ್ಮುರಿದು ಕುಳಿತಾಗ
ನಮ್ಮವರೆಂಬುವವರು ನಮ್ಮವರಾಗಲಿಲ್ಲ
ಅಯ್ಯಾ ಎಂದರೆ ಯಾರಿಗೂ ಕೇಳಿಸಲೆ ಇಲ್ಲ
ಎಲ್ಲರಿಗೂ ತಮ್ಮದು ತಮ್ಮವರದೆ ಚಿಂತೆ
ಆಗ ನಮ್ಮೊಳಗಿನ ಕತ್ತಲೆಯನ್ನು ಓಡಿಸಲು
ಮನಸಿನ ದುಗುಡಗಳನು ಮರೆಯಲು
ಹಚ್ಚೋಣ ನಾವು ದೀಪ
ದಿನ ದಿನವೂ ಸಂಭ್ರಮಿಸೋಣ ನಾವು
ಹಿತದ ಬೆಳಕಿನ ಅನುರೂಪ.
ಎಲ್ಲ ಮಿತ್ರರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಷಯಗಳು.. :) :)
-ಸ್ವರಚಿತ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ